ಎಡ್ವಿನ್ ಸ್ಯಾಮ್ಯುಯೆಲ್ ಮೊಂಟಾಗು ಪಿಸಿ (೬ ಫೆಬ್ರವರಿ ೧೮೭೯ - ೧೫ ನವೆಂಬರ್ ೧೯೨೪) ಒಬ್ಬ ಬ್ರಿಟಿಷ್ ಲಿಬರಲ್ ರಾಜಕಾರಣಿಯಾಗಿದ್ದು, ಅವರು ೧೯೧೭ ಮತ್ತು ೧೯೨೨ ರ ನಡುವೆ ಭಾರತದ ರಾಜ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. ಮೊಂಟಾಗುರವರು "ತೀವ್ರಗಾಮಿ" ಲಿಬರಲ್ ಮತ್ತು ಬ್ರಿಟಿಷ್ ಕ್ಯಾಬಿನೆಟ್‌ನಲ್ಲಿ ಸೇವೆ ಸಲ್ಲಿಸಿದ ಮೂರನೇ ಯಹೂದಿಯಾಗಿದ್ದರು( ಸರ್ ಹರ್ಬರ್ಟ್ ಸ್ಯಾಮ್ಯುಯೆಲ್ ಮತ್ತು ಸರ್ ರುಫಸ್ ಐಸಾಕ್ಸ್‌‍ರ ನಂತರ). == ಹಿನ್ನೆಲೆ ಮತ್ತು ಶಿಕ್ಷಣ == ಮೊಂಟಾಗುರವರು ಸ್ಯಾಮ್ಯುಯೆಲ್ ಮೊಂಟಾಗು(೧ ನೇ ಬ್ಯಾರನ್ ಸ್ವೇಥ್ಲಿಂಗ್)ರವರ ಎರಡನೇ ಮಗ. ಲೂಯಿಸ್ ಕೋಹೆನ್ ಅವರ ಮಗಳು ಮತ್ತು ಎಲ್ಲೆನ್ ಅವರ ಪತ್ನಿ. ಅವರು ಡೊರೆಕ್ ಕಾಲೇಜ್, ಕ್ಲಿಫ್ಟನ್ ಕಾಲೇಜು, ಸಿಟಿ ಆಫ್ ಲಂಡನ್ ಸ್ಕೂಲ್, ಯೂನಿವರ್ಸಿಟಿ ಕಾಲೇಜ್ ಲಂಡನ್ ಮತ್ತು ಟ್ರಿನಿಟಿ ಕಾಲೇಜ್, ಕೇಂಬ್ರಿಡ್ಜ್‌ನಲ್ಲಿ ಶಿಕ್ಷಣ ಪಡೆದರು. ಕೇಂಬ್ರಿಡ್ಜ್‌ನಲ್ಲಿ, ಅವರು ೧೯೦೨ ರಿಂದ ೧೯೦೩ ರವರೆಗೆ ಕೇಂಬ್ರಿಡ್ಜ್ ಯೂನಿವರ್ಸಿಟಿ ಲಿಬರಲ್ ಕ್ಲಬ್‌ನ ಮೊದಲ ವಿದ್ಯಾರ್ಥಿ ಅಧ್ಯಕ್ಷರಾಗಿದ್ದರು. ೧೯೦೨ ರಲ್ಲಿ ಅವರು ಕೇಂಬ್ರಿಡ್ಜ್ ಒಕ್ಕೂಟದ ಅಧ್ಯಕ್ಷರೂ ಆಗಿದ್ದರು. == ರಾಜಕೀಯ ವೃತ್ತಿ == ಮೊಂಟಾಗು ಅವರು ೧೯೦೬ ರಲ್ಲಿ ಚೆಸ್ಟರ್ಟನ್‌‍ನ ಸಂಸತ್ ಸದಸ್ಯರಾಗಿ ಆಯ್ಕೆಯಾದರು, ಅವರು ೧೯೧೮ ರವರೆಗೆ ಆ ಸ್ಥಾನವನ್ನು ಹೊಂದಿದ್ದರು ನಂತರ ೧೯೨೨ ರವರೆಗೆ ಕೇಂಬ್ರಿಡ್ಜ್‌ಷೈರ್ ಅನ್ನು ಪ್ರತಿನಿಧಿಸಿದರು. ಅವರು ೧೯೧೦ ರಿಂದ ೧೯೧೪ ರವರೆಗೆ ಭಾರತದ ಅಂಡರ್-ಸೆಕ್ರೆಟರಿ ಆಫ್ ಸ್ಟೇಟ್ ಆಗಿ ಎಚ್. ಎಚ್. ಆಸ್ಕ್ವಿತ್ ಅಡಿಯಲ್ಲಿ ಸೇವೆ ಸಲ್ಲಿಸಿದರು. ೧೯೧೪ - ೧೯೧೫ ಮತ್ತು ೧೯೧೫ - ೧೯೧೬ ರವರೆಗೆ ಖಜಾನೆಗೆ ಹಣಕಾಸು ಕಾರ್ಯದರ್ಶಿಯಾಗಿದ್ದರು. ೧೯೧೫ ಮತ್ತು ೧೯೧೬ ರಲ್ಲಿ ಡಚಿ ಆಫ್ ಲ್ಯಾಂಕಾಸ್ಟರ್‌ನ ಚಾನ್ಸೆಲರ್ ಆಗಿದ್ದರು. ೧೯೧೫ ರಲ್ಲಿ ಅವರು ಪ್ರಿವಿ ಕೌನ್ಸಿಲ್‌ನ ಪ್ರಮಾಣ ವಚನ ಸ್ವೀಕರಿಸಿದರು. ೧೯೧೬ ರಲ್ಲಿ ಅವರು ಯುದ್ಧಸಾಮಗ್ರಿ ಸಚಿವರಾಗಿ ಬಡ್ತಿ ಪಡೆದರು. ರಾಜ್ಯ ಕಾರ್ಯದರ್ಶಿಯಾಗಿ, ಮೊಂಟಾಗು ಬ್ರಿಟಿಷ್ ಸಾಮ್ರಾಜ್ಯದ ಹಿತಾಸಕ್ತಿಗಳನ್ನು ಪ್ರತಿನಿಧಿಸಿದರು ಮತ್ತು ಅತ್ಯಂತ ಕಠಿಣವಾದ ಭಾರತೀಯ ರಾಷ್ಟ್ರೀಯತಾವಾದಿಗಳನ್ನು ವಿರೋಧಿಸಿದರು, ಎಸ್. ಸುಬ್ರಮಣ್ಯ ಅಯ್ಯರ್ ಅವರನ್ನು "ದಕ್ಷಿಣ ಭಾರತದ ಗ್ರ್ಯಾಂಡ್ ಓಲ್ಡ್ ಮ್ಯಾನ್" ಎಂದು ಕರೆದರು. ೧೯೧೯ ರಲ್ಲಿ ಅವರು ಟರ್ಕಿಯನ್ನು ವಿಭಜಿಸುವ ಯೋಜನೆಗಳನ್ನು ವಿರೋಧಿಸಿದರು. ಈ ವಿಷಯದ ಬಗ್ಗೆ, ೧೭ ಮೇ ೧೯೧೯ ರಂದು ನಾಲ್ಕು ಕೌನ್ಸಿಲ್‌ನಲ್ಲಿ, ಅವರು ಭಾರತದ ಮುಸ್ಲಿಂ ಪ್ರತಿನಿಧಿಗಳನ್ನು ಪರಿಚಯಿಸಿದರು (ಅಗಾ ಖಾನ್ ಸೇರಿದಂತೆ). == ಜಿಯೋನಿಸಂ ವಿರೋಧಿ == ಮೊಂಟಾಗು ಜಿಯೋನಿಸಂ ಅನ್ನು ಬಲವಾಗಿ ವಿರೋಧಿಸಿದರು, ಅದನ್ನು ಅವರು "ಚೇಷ್ಟೆಯ ರಾಜಕೀಯ ನಂಬಿಕೆ" ಎಂದು ಕರೆದರು ಮತ್ತು ೧೯೧೭ ರ ಬಾಲ್ಫೋರ್ ಘೋಷಣೆಯನ್ನು ವಿರೋಧಿಸಿದರು, ಇದನ್ನು ಅವರು ಯೆಹೂದ್ಯ ವಿರೋಧಿ ಎಂದು ಪರಿಗಣಿಸಿದರು ಮತ್ತು ಅದರ ನಿಯಮಗಳನ್ನು ಅವರು ಮಾರ್ಪಡಿಸುವಲ್ಲಿ ಯಶಸ್ವಿಯಾದರು. ಕ್ಯಾಬಿನೆಟ್ಗೆ ಒಂದು ಜ್ಞಾಪಕ ಪತ್ರದಲ್ಲಿ, ಅವರು ಜಿಯೋನಿಸಂ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವಿವರಿಸಿದ್ದಾರೆ. ಆತನ ಸೋದರಸಂಬಂಧಿ ಹರ್ಬರ್ಟ್ ಸ್ಯಾಮ್ಯುಯೆಲ್, ಮಧ್ಯಮ ಝಿಯೋನಿಸ್ಟ್, ಪ್ಯಾಲೆಸ್ಟೈನ್‌ನ ಬ್ರಿಟಿಷ್ ಮ್ಯಾಂಡೇಟ್‌ನ ಮೊದಲ ಹೈ ಕಮಿಷನರ್ ಆದರು. == ಕುಟುಂಬ == ೧೯೧೨ ರಲ್ಲಿ, ಮೊಂಟಾಗು ಸಿಸಿಲಿಯಲ್ಲಿ ರಜಾದಿನಗಳಲ್ಲಿ ಪ್ರಧಾನ ಮಂತ್ರಿಯ ಜೊತೆಗೂಡಿದರು. ಮುಂದಿನ ಮೂರು ವರ್ಷಗಳಲ್ಲಿ, ಕ್ಯಾಬಿನೆಟ್ ಸಭೆಗಳಲ್ಲಿಯೂ ಸಹ ಆಸ್ಕ್ವಿತ್ ಅವರಿಗೆ ಮೊಂಟಾಗು ಅವರು ಹೆಚ್ಚು ಹೆಚ್ಚು ಕಾಗದಗಳನ್ನು ಬರೆಯುತ್ತಿದ್ದರು. ೧೯೧೩ ರಲ್ಲಿ, ಮೊಂಟಾಗು ಮದುವೆ ಪ್ರಸ್ತಾಪವನ್ನು ಅವರ ಮುಂದಿಟ್ಟರು. ಆಸ್ಕ್ವಿತ್ ಅವರನ್ನು ಇಷ್ಟಪಟ್ಟಿದ್ದರು. ಆದರೆ ಅವರ ಮದುವೆಯ ಪ್ರಸ್ತಾಪವನ್ನು ಸ್ವೀಕರಿಸಲಿಲ್ಲ. ಅಲ್ಲದೆ, ಮೊಂಟಾಗು ಅವರಿಗೆ ತಮ್ಮ ಆನುವಂಶಿಕತೆಯನ್ನು ಉಳಿಸಿಕೊಳ್ಳಲು ತಮ್ಮ ಯಹೂದಿ ನಂಬಿಕೆಯೊಳಗೆ ಮದುವೆಯಾಗಬೇಕಾಗಿತ್ತು. ಸ್ಟಾನ್ಲಿ ಅವರು ಫ್ರೀಥಿಂಕಿಂಗ್ ಕುಟುಂಬದಿಂದ ಬಂದವರಾಗಿದ್ದರು ಮತ್ತು ಧರ್ಮನಿಷ್ಠ ಆಂಗ್ಲಿಕನ್ ಆಗಿರಲಿಲ್ಲ. ಹೀಗಾಗಿ ಜುದಾಯಿಸಂಗೆ ಪರಿವರ್ತನೆಯಾಗುವುದು ಅವರಿಗೆ ತುಂಬಾ ದೊಡ್ಡ ತಡೆಗೋಡೆಯಾಗಿ ಕಂಡುಬಂದಿತು. ಮೊಂಟಾಗು ಅವರಿಗೆ ಆಸ್ಕ್ವಿತ್ ಅವರಲ್ಲಿ ಮನಸ್ಸಿತ್ತು. ವೆನೆಷಿಯಾದೊಂದಿಗಿನ ಆಸ್ಕ್ವಿತ್‌ ಅವರ ಎಪಿಸ್ಟೋಲರಿ ಗೀಳು ಮತ್ತು ಅವರ ಸಲಹೆಗಾಗಿ ಮೊಂಟಾಗು ಅವರ ನಿರಂತರ ಬೇಡಿಕೆಗಳು ಬುದ್ಧಿವಂತೆ ಮತ್ತು ಚೆನ್ನಾಗಿ ಓದಿದ ಆಸ್ಕ್ವಿತ್ ಅವರನ್ನು ಮೊಂಟಾಗು ಅವರೆಡೆಗೆ ಸೆಳೆಯಿತು. ಆಸ್ಕ್ವಿತ್ ಅವರು ರಾಜಕೀಯದಲ್ಲಿ ತೀವ್ರ ಆಸಕ್ತಿ ಹೊಂದಿದ್ದರು. ಪರಿಣಾಮವಾಗಿ, ಅವರು ೨೮ ಏಪ್ರಿಲ್ ೧೯೧೫ ರಂದು ಮೊಂಟಾಗು ಅವರ ಮದುವೆ ಪ್ರಸ್ತಾಪವನ್ನು ಒಪ್ಪಿಕೊಂಡರು. ಅವರು ಜುದಾಯಿಸಂಗೆ ಮತಾಂತರಗೊಂಡರು ಮತ್ತು ದಂಪತಿಗಳು ೨೬ ಜುಲೈ ೧೯೧೫ ರಂದು ವಿವಾಹವಾದರು. ಅವನ ಹೆಂಡತಿಯ ವ್ಯವಹಾರಗಳ ಹೊರತಾಗಿಯೂ, ಮೊಂಟಾಗುವಿನ ಮದುವೆಯು ೧೯೨೪ ರಲ್ಲಿ ಅವನ ಮರಣದವರೆಗೂ ಮುಂದುವರೆಯಿತು. ೪೫ ನೇ ವಯಸ್ಸಿನಲ್ಲಿ ಅವರ ದೈಹಿಕ ಕ್ಷೀಣತೆ ಮತ್ತು ಸಾವಿಗೆ ಕಾರಣ ತಿಳಿದಿಲ್ಲ, ಆದರೆ ರಕ್ತ ವಿಷ ಅಥವಾ ಎನ್ಸೆಫಾಲಿಟಿಸ್ ಕಾರಣ ಎಂದು ಭಾವಿಸಲಾಗಿದೆ. == ಇದನ್ನೂ ನೋಡಿ == ಯುನೈಟೆಡ್ ಕಿಂಗ್‌ಡಂನಲ್ಲಿ ಉದಾರವಾದ == ಉಲ್ಲೇಖಗಳು == == ಗ್ರಂಥಸೂಚಿ == , (13 1916). " ". . , , . (1930). . , . : . , . (1970). : . . 2 , 1877–1918, 1018–1931. . , (1964). : . , . . == ಬಾಹ್ಯ ಕೊಂಡಿಗಳು == 1803–2005: